ಕರ್ನಾಟಕ ಚಲನಚಿತ್ರ ವಿತರಕರ ಸಂಘಕ್ಕೆ ನಿರ್ಮಾಪಕ, ವಿತರಕ ಹಾಗೂ ನಿರ್ದೇಶಕ ಸಿ ಸಂಪತ್ ಕುಮಾರ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದರೆ. ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ಎನ್ ಕುಮಾರ್ ಈ ಹುದ್ದೆಯನ್ನು ಅಲಂಕರಿಸಿದ್ದರು. ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೊಸ ಪದಾದಿಕಾರಿಯಾದ್ದರಿಂದ ಅವರ ಜಾಗವು ಖಾಲಿ ಆಗಿತ್ತು. ಆ ಜಾಗಕ್ಕೆ ಸಿ ಸಂಪತ್ಕುಮಾರ್ ಆಯ್ಕೆಯಾಗಿದ್ದಾರೆ.
ನಿರ್ಮಾಪಕ ಸಂಪತ್ಕುಮಾರ್ ಅವರು ‘ಚೆನ್ನ’ ಎಂಬ ಅವರದೇ ಸಿನೆಮವನ್ನು ವಿತರಣೆ ಮಾಡಿದವರು ಬಿಡುಗಡೆಗೆ ಸಿದ್ದ ಆಗಿರುವ ಅವರ ನಿರ್ದೇಶನದ ಸಿನೆಮಾ ‘ಪ್ರೇಮ್ ನಗರ್’ ಸಿನೆಮಾದ ವಿತರಣೆಯನ್ನು ಕರ್ನಾಟಕದ್ಯಂತ ಅವರೇ ಮಾಡಲಿರುವರು.
ಕರ್ನಾಟಕ ಚಲನಚಿತ್ರ ವಿತರಕರ ಇನ್ನಿತರ ಪದಾದಿಕಾರಿಗಳು – ವೆಂಕಟೇಶ್ ಉಪಾಧ್ಯಕ್ಷ, ರಘುನಾಥ್ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಜ್ನಾನೇಶ್ವರ್ ಐತಾಳ್ ಹಾಗೂ ಇನ್ನಿತರರು. ಈ ಕರ್ನಾಟಕ ಚಲನಚಿತ್ರ ವಿತರಕರ ಸಂಘ ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದು ಮೊದಲ ಆದ್ಯಕ್ಷ ಅದವರು ಜಾನಕಿರಮ್.
ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಸಿ ಸಂಪತ್ಕುಮಾರ್ ಅವರು ಅತಿ ಶೀಘ್ರದಲ್ಲೇ ಸಣ್ಣ ಪುಟ್ಟ ನಿರ್ಮಾಣದ ವಿತರಣೆಯ ಬಗ್ಗೆ ತಾವು ಮೊದಲು ಆಧ್ಯತೆ ನಿಡುವುದಾಗಿ ಹೇಳುತ್ತಾರೆ.
ಸಿ ಸಂಪತ್ಕುಮಾರ್ ಅವರು ತಿಮ್ಮ, ಚೆನ್ನ ಹಾಗೂ ಪ್ರೇಂನಗರ್ ಸಿನೆಮಗಳನ್ನು ನಿರ್ಮಾಣ ಮಾಡಿರುವರು. ಎಸ್ ಕೆ ಪಿಕ್ಚರ್ ಅವರ ಸಂಸ್ಥೆಯ ಹೆಸರು.